ಬುದ್ಧ ಪಾದದ ಮೇಲೆ

ಹೆಜ್ಜೆ-೧

ಅವನ ದೃಢ ವಿಶಾಲ
ಪಾದದ ಮೇಲೆ
ಪುಟ್ಟಾಣಿ ಹುಳು
ಅಂಗುಲಂಗುಲ ಏರಿ
ಪುಟ್ಟ ಪಾದವನೂರಿ
ಅತ್ತಿಂದಿತ್ತ ಜೀಕುತ್ತಾ ಜೋಕಾಲೆ.
ಅವನ ಪಾದದ ಮೇಲೆ
ಅದರ ಪದತಳ.

ಒಂದಿಂಚೋ ಎರಡಿಂಚೋ ಮೂರೋ
ತಗುಲದೇ ಬಿಟ್ಟೂ ಅಂಟುವ
ಆ ಪುಟಾಣಿ ಪಾದ
ಭೂಮಿಗಪ್ಪಿದ ಅವನ ಪಾದಕ್ಕೆ
ಖೋ ಕೊಟ್ಟೆಬ್ಬಿಸಿ
ಆತು ಹಿಡಿದ
ಚುಲ್ಟಾಣಿ ಹುಳುವಿನ ಪಾದ
ಹೆಜ್ಜೆಯೂರಲು ಉಳಿದ
ಕೊನೆಯ ಜಾಗ!

ಹೆಜ್ಜೆ-೨

ಅವನ ದೃಢ ವಿಶಾಲ
ಪಾದದ ಮೇಲೆ
ಚಿಕ್ಕಾಣಿ ಚಿಕ್ಕ ಕೀಟ
ತನ್ನ ಅಂಗೈ ಇಟ್ಟು
ಒತ್ತುತ್ತಾ ಒತ್ತುತ್ತಾ
ಹೆಬ್ಬೆರಳು ಅದರ ಪಕ್ಕದ್ದು
ನಡುಕಿನದು, ಉಂಗುರದ್ದು, ಕಿರಿಯದು
ನೆಕ್ಕುತ್ತಾ ನೇವರಿಸುತ್ತಾ
ಆಟವೋ ಹುಡುಗಾಟವೋ….

ಹೆಜ್ಜೆ-೩

ಅವನ ದೃಢ ವಿಶಾಲ
ಪಾದದ ಮೇಲೆ
ಬೊಟ್ಟಿನಗಲದ ಕ್ರಿಮಿಯೊಂದು ತಲೆಯೂರಿ
ತನ್ನ ತಲೆಗೂದಲಲೇ ಗುಡಿಸಿ ಒರೆಸಿ
ತಲೆಕೆಳಗೆ ಕಾಲು ಮೇಲೆತ್ತಿ ಶಿರ್ಷಾಸನ
ಪಾದದ ಮೇಲಿಂದ
ಬೆರಳ ತುದಿವರೆಗೆ
ಜೊಯ್ಯನೆ ಜಾರೋಬಂಡಿ
ಮತ್ತೆ ಮೊದಲಿಂದ
ಪಾದಕ್ಕೆ ತಲೆಯೂರಿ
ಉಲ್ಟಾಪಲ್ಟಾ ಸರ್ಕಸ್
ಆಟಕ್ಕೆ ಉಳಿದ ಏಕೈಕ ಮೈದಾನ!

ಹೆಜ್ಜೆ-೪

ಅವನ ದೃಢ ವಿಶಾಲ
ಪಾದದ ಮೇಲೆ
ಬೆನ್ನುತಿಕ್ಕಿ ಹಗುರಾಗುವ
ಈ ಕ್ಷುದ್ರಜಂತು
ಅಂಗಾತ ಮಲಗಿ ಶವಾಸನ.
ಕ್ಷಣಕ್ಕೇ ತಿರುವು ಮುರುವಾಗಿ
ಹೊಟ್ಟೆ ಮೇಲೆ ದೇಕುತ್ತಾ
ಬೆರಳಿಂದ ಪಾದಬುಡಕ್ಕೆ
ಪಾದ ಮೂಲದಿಂದ
ಬೆರಳ ತುತ್ತತುದಿಗೆ ಉರುಳಾಟ
ಕೊಬ್ಬಿದ ದೇಹ ಸವೆತಕ್ಕೆ ಒದ್ದಾಟ!

ಹೆಜ್ಜೆ-೫

ಕೊಟ್ಟಕೊನೆಯ ವಿಹಾರಧಾಮ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರಿಗೆ ಬೇಕು ಕವಿತಾ? ಬ್ರೆಡ್ ತಾ ಬೆಣ್ಣಿ ತಾ
Next post ಮನ ಮಂಥನ ಸಿರಿ – ೨

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys